ಪಂಡಿತ್ ಜಸರಾಜ್ ರವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಮುಖ ಗಾಯಕರಲ್ಲಿ ಒಬ್ಬರು. ಇವರು (೨೮ ಜನವರಿ ೧೯೩೦ - ೧೭ ಆಗಸ್ಟ್ ೨೦೨೦ ) ಮೇವಾತೀ ಘರಾನಾ (ಸಂಗೀತ ಕಲಿಯುವ ವಂಶಾವಳಿ) ಗೆ ಸೇರಿದ ಭಾರತೀಯ ಶಾಸ್ತ್ರೀಯ ಗಾಯಕರಾಗಿದ್ದರು. ಅವರ ಸಂಗೀತ ವೃತ್ತಿಜೀವನವು ೭೫ ವರ್ಷಗಳ ಕಾಲ ಮುಂದುವರಿಯಿತು. ಇದರ ಪರಿಣಾಮವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿ, ಗೌರವ ಮತ್ತು ಹಲವಾರು ಪ್ರಮುಖ ಪ್ರಶಸ್ತಿಗಳು ಬಂದಿವೆ. ಅವರ ಪರಂಪರೆಯಲ್ಲಿ ಶಾಸ್ತ್ರೀಯ ಮತ್ತು ಅರೆ-ಶಾಸ್ತ್ರೀಯ ಗಾಯನ ಸಂಗೀತ, ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ, ಆಲ್ಬಾಂಗಳು ಮತ್ತು ಚಲನಚಿತ್ರ ಧ್ವನಿಪಥಗಳು, ಹವೇಲಿ ಸಂಗೀತ ಸೇರಿದಂತೆ ವಿವಿಧ ಪ್ರಕಾರಗಳಲ್ಲಿನ ಆವಿಷ್ಕಾರಗಳು ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಚಿಂತನೆಯ ಶಾಲೆಯಾದ ಮೇವಾತೀ ಘರಾನಾವನ್ನು ಜನಪ್ರಿಯಗೊಳಿಸುವುದು ಸೇರಿವೆ. ಪಂಡಿತ್ ಜಸರಾಜ್ ಅವರು ಭಾರತ, ಯುರೋಪ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಹವ್ಯಾಸಿ ಮತ್ತು ವೃತ್ತಿಪರ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸಿದರು. == ಆರಂಭಿಕ ಜೀವನ == ಜಸರಾಜ್‌ರವರು ೧೯೩೦ ರ ಜನವರಿ ೨೮ ರಂದು ಹರಿಯಾಣದ ಅಂದಿನ ಹಿಸಾರ್ ಜಿಲ್ಲೆಯ (ಈಗ ಫತೇಹಾಬಾದ್ ಜಿಲ್ಲೆಯಲ್ಲಿದೆ) ಪಿಲಿ ಮಂಡೋರಿ ಎಂಬ ಹಳ್ಳಿಯಲ್ಲಿ ಶಾಸ್ತ್ರೀಯ ಗಾಯಕರಾದ ಪಂಡಿತ್ ಮೋತಿರಾಮ್ ಮತ್ತು ಕೃಷ್ಣ ಬಾಯಿ ಅವರ ಕಲಾತ್ಮಕ ಕುಟುಂಬದಲ್ಲಿ ಜನಿಸಿದರು. ಅವರು ಶಾಸ್ತ್ರೀಯ ಗಾಯಕರ ಕುಟುಂಬದಲ್ಲಿ ಮೂವರು ಗಂಡು ಮಕ್ಕಳಲ್ಲಿ ಕಿರಿಯರಾಗಿದ್ದರು. ೧೯೩೪ ರಲ್ಲಿ, ಜಸರಾಜ್‌ರವರು ನಾಲ್ಕು ವರ್ಷದವರಾಗಿದ್ದಾಗ, ಮೀರ್ ಒಸ್ಮಾನ್ ಅಲಿ ಖಾನ್ ಅವರ ಆಸ್ಥಾನದಲ್ಲಿ ರಾಜ್ಯ ಸಂಗೀತಗಾರನಾಗಿ ನೇಮಕಗೊಳ್ಳಬೇಕಿದ್ದ ದಿನದಂದು ಅವರ ತಂದೆ ಪಂಡಿತ್ ಮೋತಿರಾಮ್‌ರವರು ನಿಧನರಾದರು. ಅವರ ಹಿರಿಯ ಸಹೋದರರಾದ ಪಂಡಿತ್ ಮಣಿರಾಮ್, ಅವರು ತಮ್ಮ ತಂದೆಯ ಮರಣದ ನಂತರ ಜಸರಾಜ್ ಅವರಿಗೆ ಒಂದು ಸೂಚನೆಯನ್ನು ನೀಡಿದರು. ಏನೆಂದರೆ, ಜಸ್ರಾಜ್ ಅವರ ಹಿರಿಯ ಸಹೋದರರಾದ ಪಂಡಿತ್ ಪ್ರತಾಪ್ ನಾರಾಯಣ್ ಅವರು ಕೂಡ ನಿಪುಣ ಸಂಗೀತಗಾರರಾಗಿದ್ದರು ಮತ್ತು ಸಂಗೀತ ಸಂಯೋಜನೆಯ ಜೋಡಿಯಾಗಿದ್ದ ಜತಿನ್-ಲಲಿತ್‌ರವರು, ಗಾಯಕಿ-ನಟಿ ಸುಲಕ್ಷಣಾ ಪಂಡಿತ್ ಮತ್ತು ನಟಿ ವಿಜೇತಾ ಪಂಡಿತ್ ಅವರ ತಂದೆಯಾಗಿದ್ದರು. ಪಂಡಿತ್ ಪ್ರತಾಪ್ ನಾರಾಯಣ್ ಅವರು ಜಸರಾಜ್ ಅವರಿಗೆ ೭ ನೇ ವಯಸ್ಸಿನಿಂದಲೇ ತಬಲಾ ನುಡಿಸಲು ಕಲಿಸಿದರು. ಆದರೆ, ಅವರು ೧೪ ನೇ ವಯಸ್ಸಿನಲ್ಲಿ ಮಾತ್ರ ಹಾಡಲು ಬಯಸುತ್ತಾರೆ ಎಂದು ನಿರ್ಧರಿಸಿದರು. ಜಸರಾಜ್‌ರವರು ತಮ್ಮ ಯೌವನವನ್ನು ಹೈದರಾಬಾದ್‌ನಲ್ಲಿ ಕಳೆದರು ಮತ್ತು ಮೇವಾತೀ ಘರಾನಾದ ಸಂಗೀತಗಾರರೊಂದಿಗೆ ಸಂಗೀತವನ್ನು ಕಲಿಯಲು ಗುಜರಾತ್‌ನ ಸನಂದ್‌ಗೆ ಆಗಾಗ ಪ್ರಯಾಣಿಸುತ್ತಿದ್ದರು. ಶಾಸ್ತ್ರೀಯ ಸಂಗೀತಕ್ಕೆ ಆಳವಾಗಿ ಸಮರ್ಪಿತರಾಗಿದ್ದ ಸನಂದ್‌ನ ಠಾಕೂರ್ ಸಾಹಿಬ್‌ರವರು ಮಹಾರಾಜ್ ಜಯವಂತ್ ಸಿಂಗ್ ವಘೇಲಾ ಅವರಿಗಾಗಿ ಜಸರಾಜ್‌ರವರು ಪ್ರದರ್ಶನ ನೀಡಿದರು ಮತ್ತು ಅವರಿಂದ ತರಬೇತಿ ಪಡೆದರು. ೧೯೪೬ ರಲ್ಲಿ, ಜಸರಾಜ್‌ರವರು ಕಲ್ಕತ್ತಾಗೆ ತೆರಳಿದರು. ಅಲ್ಲಿ ಅವರು ರೇಡಿಯೋ ಕಾರ್ಯಕ್ರಮಕ್ಕಾಗಿ ಶಾಸ್ತ್ರೀಯ ಸಂಗೀತವನ್ನು ಹಾಡಲು ಪ್ರಾರಂಭಿಸಿದರು. == ವೈಯಕ್ತಿಕ ಜೀವನ == ೧೯೬೨ ರಲ್ಲಿ, ಜಸರಾಜ್‌ರವರು ಚಲನಚಿತ್ರ ನಿರ್ದೇಶಕ ವಿ.ಶಾಂತಾರಾಮ್ ಅವರ ಪುತ್ರಿ ಮಧುರಾ ಶಾಂತಾರಾಮ್ ಅವರನ್ನು ವಿವಾಹವಾದರು. ಜಸರಾಜ್‌ರವರು ಮಧುರಾ ಅವರನ್ನು ೧೯೬೦ ರಲ್ಲಿ, ಬಾಂಬೆಯಲ್ಲಿ ಮೊದಲ ಬಾರಿಗೆ ಭೇಟಿಯಾದರು. ಅವರು ಆರಂಭದಲ್ಲಿ ಕಲ್ಕತ್ತಾದಲ್ಲಿ ವಾಸಿಸುತ್ತಿದ್ದರು, ನಂತರ ೧೯೬೩ ರಲ್ಲಿ ಬಾಂಬೆಗೆ ತೆರಳಿದರು. ಅವರಿಗೆ ಇಬ್ಬರು ಮಕ್ಕಳಿದ್ದರು, ಮಗ ಸಾರಂಗ್ ದೇವ್ ಪಂಡಿತ್, ಮಗಳು ದುರ್ಗಾ ಜಸರಾಜ್ ಮತ್ತು ನಾಲ್ಕು ಮೊಮ್ಮಕ್ಕಳಿದ್ದರು. ಮಧುರಾರವರು ೨೦೦೯ ರಲ್ಲಿ, ಸಂಗೀತ್ ಮಾರ್ತಾಂಡ್ ಪಂಡಿತ್ ಜಸರಾಜ್ ಎಂಬ ಚಲನಚಿತ್ರವನ್ನು ಮಾಡಿದರು ಮತ್ತು ೨೦೧೦ ರಲ್ಲಿ, ಅವರ ಮೊದಲ ಮರಾಠಿ ಚಿತ್ರವಾದ ಆಯಿ ತುಜಾ ಆಶಿರ್ವಾದ್ ಅನ್ನು ನಿರ್ದೇಶಿಸಿದರು. ಇದರಲ್ಲಿ ಅವರ ಪತಿ ಜಸರಾಜ್ ಮತ್ತು ಲತಾ ಮಂಗೇಶ್ಕರ್ ಮರಾಠಿಯಲ್ಲಿ ಹಾಡಿದರು. == ವೃತ್ತಿಜೀವನ == === ತರಬೇತಿ === ಜಸರಾಜ್‌ರವರು ತಮ್ಮ ತಂದೆಯಿಂದ ಗಾಯನ ಸಂಗೀತಕ್ಕೆ ದೀಕ್ಷೆ ಪಡೆದರು ಮತ್ತು ಅವರ ಹಿರಿಯ ಸಹೋದರರಾದ ಪಂಡಿತ್ ಪ್ರತಾಪ್ ನಾರಾಯಣ್ ಅವರ ಮೂಲಕ ತಬಲಾ ಸಂಯೋಜಕರಾಗಿ ತರಬೇತಿಯನ್ನು ಪಡೆದರು. ಮಣಿರಾಮ್ ಅವರ ಏಕವ್ಯಕ್ತಿ ಗಾಯನ ಪ್ರದರ್ಶನಗಳಲ್ಲಿ ಅವರು ಆಗಾಗ್ಗೆ ಅವರೊಂದಿಗೆ ಹೋಗುತ್ತಿದ್ದರು. ಗಾಯಕಿ ಬೇಗಂ ಅಖ್ತರ್ ಅವರು ಶಾಸ್ತ್ರೀಯ ಸಂಗೀತವನ್ನು ತೆಗೆದುಕೊಳ್ಳಲು ಸ್ಫೂರ್ತಿ ನೀಡಿದರು ಎಂದು ಅವರು ಹೇಳುತ್ತಾರೆ. ಜಸರಾಜ್‌ರವರು ತಮ್ಮ ೧೪ ನೇ ವಯಸ್ಸಿನಲ್ಲಿ ಗಾಯಕರಾಗಿ ತರಬೇತಿಯನ್ನು ಪ್ರಾರಂಭಿಸಿದರು. ಹಾಗೂ ಅವರು ದಿನಕ್ಕೆ ಸುಮಾರು ೧೪ ಗಂಟೆಗಳ ಕಾಲ ಹಾಡುವುದನ್ನು ಅಭ್ಯಾಸ ಮಾಡುತ್ತಿದ್ದರು. ೧೯೫೨ ರಂದು, ಅವರು ತಮ್ಮ ೨೨ ನೇ ವಯಸ್ಸಿನಲ್ಲಿ ಕಠ್ಮಂಡುವಿನಲ್ಲಿ ನೇಪಾಳದ ರಾಜ ತ್ರಿ ಭುವನ್ ಬೀರ್ ಬಿಕ್ರಮ್ ಷಾ ಅವರ ಆಸ್ಥಾನದಲ್ಲಿ ಗಾಯಕರಾಗಿ ತಮ್ಮ ಮೊದಲ ವೇದಿಕೆಯಾಗಿ ಸಂಗೀತ ಕಚೇರಿಯನ್ನು ನಡೆಸಿದರು. ರಂಗಪ್ರದರ್ಶಕರಾಗುವ ಮೊದಲು, ಜಸರಾಜ್‌ರವರು ಹಲವಾರು ವರ್ಷಗಳ ಕಾಲ ರೇಡಿಯೋದಲ್ಲಿ ಪ್ರದರ್ಶನ ಕಲಾವಿದರಾಗಿ ಕೆಲಸ ಮಾಡಿದರು. ಅವರು ಆರಂಭದಲ್ಲಿ ಪಂಡಿತ್ ಮಣಿರಾಮ್ ಅವರೊಂದಿಗೆ ಶಾಸ್ತ್ರೀಯ ಗಾಯಕರಾಗಿ ತರಬೇತಿ ಪಡೆದರು. ನಂತರ, ಜೈವಂತ್ ಸಿಂಗ್ ವಘೇಲಾ, ಗಾಯಕ ಮತ್ತು ಬೀಂಕರ್ ಜೊತೆಗೆ ತರಬೇತಿ ಪಡೆದರು. === ತಂತ್ರ ಮತ್ತು ಶೈಲಿ === ==== ಶಾಸ್ತ್ರೀಯ ಸಂಗೀತ ==== ಜಸರಾಜ್‌ರವರು ಖಯಾಲ್‌ಗಳ ಸಾಂಪ್ರದಾಯಿಕ ಪ್ರದರ್ಶನಗಳಿಗೆ ಹೆಸರುವಾಸಿಯಾದ ಸಂಗೀತದ ಶಾಲೆಯಾದ ಮೇವಾತೀ ಘರಾನಾಕ್ಕೆ ಸೇರಿದವರಾಗಿದ್ದರೂ, ಜಸರಾಜ್‌ರವರು ಕೆಲವು ನಮ್ಯತೆಯೊಂದಿಗೆ ಖಯಾಲ್‍ಗಳನ್ನು ಹಾಡಿದ್ದರು. ತುಮ್ರಿ ಸೇರಿದಂತೆ ಹಗುರವಾದ ಶೈಲಿಗಳ ಅಂಶಗಳನ್ನು ಸೇರಿಸಿದ್ದರು. ಅವರ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ, ಸಂಗೀತದ ಇತರ ಶಾಲೆಗಳು ಅಥವಾ ಘರಾಣಾಗಳ ಅಂಶಗಳನ್ನು ತಮ್ಮ ಗಾಯನದಲ್ಲಿ ಸೇರಿಸಿದ್ದಕ್ಕಾಗಿ ಅವರು ಟೀಕಿಸಲ್ಪಟ್ಟರು. ಆದಾಗ್ಯೂ, ಘರಾಣಾಗಳಾದ್ಯಂತ ಅಂಶಗಳನ್ನು ಎರವಲು ಪಡೆಯುವುದು ಈಗ ಹೆಚ್ಚು ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟಿದೆ ಎಂದು ಸಂಗೀತಶಾಸ್ತ್ರಜ್ಞ ಎಸ್. ಕಾಳಿದಾಸ್ ಗಮನಿಸಿದ್ದಾರೆ. ಜಸರಾಜ್‌ರವರು ಜಸ್ರಂಗಿ ಎಂಬ ಜುಗಲ್ಬಂದಿಯ ಹೊಸ ರೂಪವನ್ನು ರಚಿಸಿದರು. ಇದು ಪ್ರಾಚೀನ ಮೂರ್ಚನಾ ಪದ್ಧತಿಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಇದು ಪುರುಷ ಮತ್ತು ಮಹಿಳಾ ಗಾಯಕರ ನಡುವೆ, ಪ್ರತಿಯೊಬ್ಬರೂ ಒಂದೇ ಸಮಯದಲ್ಲಿ ವಿಭಿನ್ನ ರಾಗಗಳನ್ನು ಹಾಡುತ್ತಾರೆ. ಅವರು ಅಬಿರಿ ತೋಡಿ ಮತ್ತು ಪಟ್ದೀಪಕಿ ಸೇರಿದಂತೆ ವಿವಿಧ ಅಪರೂಪದ ರಾಗಗಳನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದರು. ==== ಅರೆ-ಶಾಸ್ತ್ರೀಯ ಮತ್ತು ಜನಪ್ರಿಯ ಸಂಗೀತ ==== ಶಾಸ್ತ್ರೀಯ ಸಂಗೀತವನ್ನು ಪ್ರದರ್ಶಿಸುವುದರ ಜೊತೆಗೆ, ದೇವಾಲಯಗಳಲ್ಲಿ ಅರೆ-ಶಾಸ್ತ್ರೀಯ ಪ್ರದರ್ಶನಗಳನ್ನು ಒಳಗೊಂಡಿರುವ ಹವೇಲಿ ಸಂಗೀತದಂತಹ ಅರೆ-ಶಾಸ್ತ್ರೀಯ ಸಂಗೀತ ಶೈಲಿಗಳಲ್ಲಿ ಹೊಸತನವನ್ನು ಮೂಡಿಸಲು ಜಸರಾಜ್‌ರವರು ಕೆಲಸ ಮಾಡಿದರು. ಲಡ್ಕಿ ಸಹ್ಯಾದ್ರಿ ಕಿ (೧೯೬೬) ಚಿತ್ರಕ್ಕಾಗಿ ಸಂಯೋಜಕರಾದ ವಸಂತ್ ದೇಸಾಯಿ ಅವರು ಅಹಿರ್ ಭೈರವ್ ರಾಗದಲ್ಲಿ ಸಂಯೋಜಿಸಿದ 'ವಂದನ ಕರೋ' ಗೀತೆಯಂತಹ ಚಲನಚಿತ್ರ ಧ್ವನಿಮುದ್ರಿಕೆಗಳಿಗಾಗಿ ಅವರು ಶಾಸ್ತ್ರೀಯ ಮತ್ತು ಅರೆ-ಶಾಸ್ತ್ರೀಯ ಸಂಯೋಜನೆಗಳನ್ನು ಹಾಡಿದ್ದರು. ಬಿರ್ಬಲ್ ಮೈ ಬ್ರದರ್ (೧೯೭೫) ಚಿತ್ರದ ಧ್ವನಿಪಥಕ್ಕಾಗಿ ಗಾಯಕರಾದ ಭೀಮಸೇನ್ ಜೋಶಿ ಅವರೊಂದಿಗೆ ಯುಗಳ ಗೀತೆ ಹಾಗೂ ಭಯಾನಕ ಚಲನಚಿತ್ರ ವಾದ ತುಮ್ಸೆ ಹೈ ವಾದ ವನ್ನುವಿಕ್ರಮ್ ಭಟ್‌ರವರು ೧೯೨೦ (೨೦೦೮) ಎಂಬ ಹೆಸರಿಗೆ ನಿರ್ದೇಶನ ಮಾಡಿದರು. ಜಸರಾಜ್‌ರವರು ತನ್ನ ತಂದೆಯ ನೆನಪಿಗಾಗಿ ಹೈದರಾಬಾದ್‌ನಲ್ಲಿ ಪಂಡಿತ್ ಮೋತಿರಾಮ್ ಪಂಡಿತ್ ಮಣಿರಾಮ್ ಸಂಗೀತ್ ಸಮರೋಹ್ ಎಂಬ ವಾರ್ಷಿಕ ಸಂಗೀತ ಉತ್ಸವವನ್ನು ಆಯೋಜಿಸಿದರು. ೧೯೭೨ ರಿಂದ ಇದನ್ನು ವಾರ್ಷಿಕ ಉತ್ಸವವಾಗಿ ನಡೆಸಲಾಗುತ್ತಿದೆ. ೨೮ ಜನವರಿ ೨೦೧೭ ರಂದು, ಪ್ರೊಡಕ್ಷನ್ ಹೌಸ್ ನವರಸ ಡುಯೆಂಡೆ ಜಸರಾಜ್ ಅವರ ೮೭ ನೇ ಹುಟ್ಟುಹಬ್ಬವನ್ನು ಮತ್ತು ಸಂಗೀತಕ್ಕೆ ಅವರ ೮೦ ವರ್ಷಗಳ ಸೇವೆಯನ್ನು ನವ ದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಪಂಡಿತ್ ಜಸರಾಜ್ ಅವರೊಂದಿಗೆ ನನ್ನ ಪ್ರಯಾಣ ಎಂಬ ಶಾಸ್ತ್ರೀಯ ಸಂಗೀತ ಕಚೇರಿಯೊಂದಿಗೆ ಆಚರಿಸಿತು. ಅವರು ಎದ್ದು ನಿಂತು ಚಪ್ಪಾಳೆಗಳನ್ನು ಪಡೆದರು. ==== ಬೋಧನೆ ==== ಸಪ್ತರ್ಷಿ ಚಕ್ರವರ್ತಿ, ಸಂಜೀವ್ ಅಭ್ಯಂಕರ್, ಪಿಟೀಲು ವಾದಕರಾದ ಕಲಾ ರಾಮನಾಥ್, ಸಂದೀಪ್ ರಾನಡೆ, ಶೆಹನಾಯ್, ಆಟಗಾರರಾದ ಲೋಕೇಶ್ ಆನಂದ್, ತೃಪ್ತಿ ಮುಖರ್ಜಿ, ಸುಮನ್ ಘೋಷ್, ಫ್ಲೌಟಿಸ್ಟ್ ಶಶಾಂಕ್ ಸುಬ್ರಮಣ್ಯಂ, ಅನುರಾಧಾ ಪೌಡ್ವಾಲ್, ಸಾಧನ ಸರ್ಗಮ್ ಮತ್ತು ರಮೇಶ್ ನಾರಾಯಣ್ ಹೀಗೆ ಸೇರಿದಂತೆ ಹಲವಾರು ವಿದ್ಯಾರ್ಥಿಗಳಿಗೆ ಜಸರಾಜ್‌ರವರು ಶಾಸ್ತ್ರೀಯ ಸಂಗೀತವನ್ನು ಕಲಿಸಿದ್ದಾರೆ. ಅವರು ಅಟ್ಲಾಂಟಾ, ಟ್ಯಾಂಪಾ, ವ್ಯಾಂಕೋವರ್, ಟೊರೊಂಟೊ, ನ್ಯೂಯಾರ್ಕ್, ನ್ಯೂಜೆರ್ಸಿ, ಪಿಟ್ಸ್‌ಬರ್ಗ್, ಮುಂಬೈ ಮತ್ತು ಕೇರಳದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತಕ್ಕಾಗಿ ಶಾಲೆಗಳನ್ನು ಸ್ಥಾಪಿಸಿದರು. ಜಸರಾಜ್‌ರವರು ಪ್ರತಿ ವರ್ಷ ಆರು ತಿಂಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ನ್ಯೂಜೆರ್ಸಿಯಲ್ಲಿರುವ ಅವರ ಮನೆಯಲ್ಲಿ, ಬೋಧನೆ ಅಥವಾ ಪ್ರವಾಸದಲ್ಲಿ ಕಳೆಯುತ್ತಿದ್ದರು. ೯೦ ನೇ ವಯಸ್ಸಿನಲ್ಲಿ, ಅವರು ತಮ್ಮ ಕೆಲವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸ್ಕೈಪ್ ಮೂಲಕ ಕಲಿಸುತ್ತಿದ್ದರು. == ನಿಧನ == ದೇಶವು ಕೋವಿಡ್-೧೯ ಲಾಕ್‌ಡೌನ್‌ಗೆ ಪ್ರವೇಶಿಸಿದಾಗ ಪಂಡಿತ್ ಜಸರಾಜ್‌ರವರು ಯುಎಸ್ ನಲ್ಲಿಯೇ ಇದ್ದರು. ಅವರು ೧೭ ಆಗಸ್ಟ್ ೨೦೨೦ ರಂದು ಬೆಳಿಗ್ಗೆ ೫:೧೫ ಇಎಸ್‌ಟಿ ಕ್ಕೆ ನ್ಯೂಜೆರ್ಸಿಯ ತಮ್ಮ ಮನೆಯಲ್ಲಿ ಹೃದಯ ಸ್ತಂಭನದಿಂದಾಗಿ ನಿಧನರಾದರು. ಅವರ ದೇಹವನ್ನು ನಂತರ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಸ್ವದೇಶಕ್ಕೆ ತರಲಾಯಿತು. ಅಲ್ಲಿ ಅವರ ಮೃತದೇಹವನ್ನು ವೈಲ್ ಪಾರ್ಲೆಯಲ್ಲಿರುವ ಪವನ್ ಹನ್ಸ್ ಸ್ಮಶಾನದಲ್ಲಿ ರಾಜ್ಯ ಗೌರವಗಳು ಮತ್ತು ೨೧-ಗನ್ ಸೆಲ್ಯೂಟ್‌ನೊಂದಿಗೆ ದಹಿಸಲಾಯಿತು. ಭಾರತದ ಪ್ರಧಾನಮಂತ್ರಿಯಾದ ನರೇಂದ್ರ ಮೋದಿಯವರು ಜಸರಾಜ್‌ರವರ ಬಗ್ಗೆ ಈ ರೀತಿ ಹೇಳಿದರು: ಅವರ ಮರಣದಿಂದಾಗಿ "ಭಾರತೀಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಳವಾದ ಶೂನ್ಯವನ್ನು ಕಾಣುತ್ತೇವೆ. ಅವರ ನಿರೂಪಣೆಗಳು ಅತ್ಯುತ್ತಮವಾಗಿದ್ದವು ಮಾತ್ರವಲ್ಲ, ಅವರು ಹಲವಾರು ಇತರ ಗಾಯಕರಿಗೆ ಅಸಾಧಾರಣ ಮಾರ್ಗದರ್ಶಕರಾಗಿ ಗುರುತಿಸಿಕೊಂಡರು." ೨೭ ಡಿಸೆಂಬರ್ ೨೦೨೩ ರಂದು, ಜಸರಾಜ್ ಅವರ ಸಂಗೀತೋತ್ಸವದ ೫೦ ವರ್ಷಗಳ ನೆನಪಿಗಾಗಿ ಮೋದಿ ಅವರು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. == ಪ್ರಶಸ್ತಿಗಳು ಮತ್ತು ಗೌರವಗಳು == ಪದ್ಮಶ್ರೀ (೧೯೭೫) ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೮೭) ಪದ್ಮಭೂಷಣ (೧೯೯೦) ಪದ್ಮ ವಿಭೂಷಣ (೨೦೦೦) ಸ್ವಾತಿ ಸಂಗೀತ ಪುರಸ್ಕಾರ (೨೦೦೮) ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ (೨೦೧೦) ಪು ಲಾ ದೇಶಪಾಂಡೆ ಜೀವಮಾನ ಸಾಧನೆ ಪ್ರಶಸ್ತಿ (೨೦೧೨) ಭಾರತ ರತ್ನ ಭೀಮಸೇನ್ ಜೋಶಿ ಶಾಸ್ತ್ರೀಯ ಸಂಗೀತ ಜೀವನ ಸಾಧನೆ ಪ್ರಶಸ್ತಿ (೨೦೧೩) ಜೀವಮಾನ ಸಾಧನೆಗಾಗಿ ಸುಮಿತ್ರಾ ಚರತ್ ರಾಮ್ ಪ್ರಶಸ್ತಿ (೨೦೧೪) ಮಾರ್ವಾರ್ ಸಂಗೀತ ರತ್ನ ಪ್ರಶಸ್ತಿ (೨೦೧೪) ಗಂಗೂಬಾಯಿ ಹಾನಗಲ್ ಜೀವಮಾನ ಸಾಧನೆ ಪ್ರಶಸ್ತಿ (೨೦೧೬) ೨೦೦೬ ರಲ್ಲಿ, ಮೌಂಟ್ ಲೆಮ್ಮನ್ ಸಮೀಕ್ಷೆಯೊಂದಿಗೆ ಖಗೋಳಶಾಸ್ತ್ರಜ್ಞರು ಕಂಡುಹಿಡಿದ ಕ್ಷುದ್ರಗ್ರಹ ೩೦೦೧೨೮ ಪಂಡಿತ್ ಜಸರಾಜ್ ಅವರ ಗೌರವಾರ್ಥವಾಗಿ ಹೆಸರಿಸಲಾಯಿತು. ಅಧಿಕೃತ ನಾಮಕರಣ ಉಲ್ಲೇಖವನ್ನು ಮೈನರ್ ಪ್ಲಾನೆಟ್ ಸೆಂಟರ್ ೨೭ ಆಗಸ್ಟ್ ೨೦೧೯ ರಂದು ಪ್ರಕಟಿಸಿತು (ಎಂಪಿಸಿ ೧೧೫೮೯೯). ಸಂಗೀತ ಕಲಾ ರತ್ನ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ. ಮಹಾರಾಷ್ಟ್ರ ಗೌರವ್ ಪುರಸ್ಕಾರ. == ಡಿಸ್ಕೊಗ್ರಫಿ == ರಾಗ ಸಿಂಫನಿ (೨೦೦೯) ಅನುರಾಗ್ (೨೦೦೦) ಭಕ್ತಿಯಿಂದ ನಿಮ್ಮದು ದಿ ಗ್ಲೋರಿ ಆಫ್ ಡಾನ್ - ಮಾರ್ನಿಂಗ್ ರಾಗಸ್ (೨೦೦೫) ಇನ್ವೊಕೇಶನ್ (೧೯೯೩ ಕನ್ಹಾ ಖಜಾನಾ (೨೦೦೮) ಇನ್ ಕನ್ಸರ್ಟ್ ವ್ಯಾಂಕೋವರ್ ಸಂಪುಟಗಳು ೧ & ೨ (೧೯೯೭) ಮಲ್ಹಾರ್ - ಎ ಡೌನ್ ಪೂರ್ ಆಫ್ ಮ್ಯೂಸಿಕ್ (೨೦೦೫) ಪಂಡಿತ್ ಜಸರಾಜ್ ಅವರ ಧ್ಯಾನ ಸಂಗೀತ. ಪರಂಪರಾ - ಮೇವತಿ ಸಂಪ್ರದಾಯ. ಪ್ರೈಡ್ ಆಫ್ ಇಂಡಿಯಾ (೨೦೦೨) ಮುಲ್ತಾನಿ ಮತ್ತು ದಿನ್-ಕಿ-ಪುರ್ಯ ಶ್ರೀ ಕೃಷ್ಣ ಅನುರಾಗ್ (೨೦೦೦) ಸಾಂಗ್ಸ್ ಆಫ್ ಕೃಷ್ಣ ಸಂಪುಟ ೧ & ಸಂಪುಟ ೨ (೨೦೦೦) ದಿ ಸ್ಪಿರಿಚ್ಯುಯಲ್ ಜರ್ನಿ (೨೦೦೫) ಬೈಜು ಬಾವ್ರಾ ಸಂಪುಟಗಳು ೧ & ೨ (೨೦೦೮) ದೇವಿ ಉಪಾಸನಾ (೨೦೦೭) ಮಿಯಾನ್ ತಾನ್ಸೇನ್ ಸಂಪುಟ ೧ & ಸಂಪುಟ ೨ (೨೦೦೬) ತಪಸ್ಯ ಸಂಪುಟ ೧ (೨೦೦೫) ದರ್ಬಾರ್ (೨೦೦೩) ಮಹೇಶ್ವರ ಮಂತ್ರ (೨೦೦೨) ಸೋಲ್ ಫುಡ್ (೨೦೦೫) ಹವೇಲಿ ಸಂಗೀತ್ (೨೦೦೧) ಸ್ಫೂರ್ತಿ (೨೦೦೦) ರಾಗಗಳು ತ್ರಿವೇಣಿ ಮತ್ತು ಮುಲ್ತಾನಿ ಲೈವ್. ರಾಗಸ್ ಬಿಹಾಗ್ಡಾ ಮತ್ತು ಗೌಡ್ ಗಿರಿ ಮಲ್ಹಾರ್. ಸಂಗೀತದಿಂದ ಆರಾಧನೆ/ಲೈವ್ ಸ್ಟಗ್ಗರ್ಟ್ '೮೮ ಅಲಂಕಾರಿಕ ಧ್ವನಿ == ಚಲನಚಿತ್ರ ಧ್ವನಿಪಥಗಳಲ್ಲಿನ ಅಭಿನಯಗಳು == "ವಂದನಾ ಕರೋ" (೧೯೬೬, ಅಹಿರ್ ಭೈರವನನ್ನು ಆಧರಿಸಿದ ವಸಂತ ದೇಸಾಯಿ ಅವರ ಸಂಗೀತ) "ಬೀರಬಲ್ ಮೈ ಬ್ರದರ್" (೧೯೭೩, ಶ್ಯಾಮ್ ಪ್ರಭಾಕರ್ ಅವರ ಸಂಗೀತ, ಮಲ್ಕೌನ್ಸ್ ಆಧರಿಸಿದ ಜುಗಲ್ಬಂದಿ (ಭೀಮಸೇನ್ ಜೋಶಿ ಅವರೊಂದಿಗೆ) ಏಕ್ ಹಸೀನಾ ಥಿ (ಚಲನಚಿತ್ರ)ಯಲ್ಲಿ "ನೀಂಡ್ ನಾ ಆಯೆ" ಏಕ್ ಹಸೀನಾ ಥಿ' (೨೦೦೪, ಸಂಗೀತ ಅಮರ್ ಮೊಹಿಲೆ) "ವಾಡಾ ತುಮ್ಸೆ ಹೈ ವಾಡಾ" ಇನ್ "೧೯೨೦" (೨೦೦೮, ಸಂಗೀತ ಅದ್ನಾನ್ ಸಾಮಿ) ಲೈಫ್ ಆಫ್ ಪೈ (ಚಲನಚಿತ್ರ)ದಲ್ಲಿ ಒಂದು ಹಾಡು 'ಲೈಫ್ ಆಫ್ ಪೈ' (೨೦೧೨, ಅಹಿರ್ ಭೈರವ್ ಆಧಾರಿತ ಮೈಚೇಲ್ ಡನ್ನಾ ಅವರ ಸಂಗೀತ) == ಬಾಹ್ಯ ಸಂಪರ್ಕಗಳು == . 2005-03-08 ವೇಬ್ಯಾಕ್ ಮೆಷಿನ್ ನಲ್ಲಿ. , == ಉಲ್ಲೇಖಗಳು ==